News & Media

Kit distributed to navasahaja members by snehalaya

ಮಂಗಳೂರು: ದಿ.8 ಮೇ ರಂದು ಸ್ನೇಹಾಲಯ ವತಿಯಿಂದ ನವಸಹಜ ಸಮುದಾಯ ಸಂಘಟನೆಯ ಸದಸ್ಯರಿಗೆ ಕಿಟ್ ವಿತರಣಾ ಕಾರ್ಯಕ್ರಮ ಮಂಗಳೂರು ನಗರದಲ್ಲಿ ನಡೆಯಿತು.
 ಈಗಾಗಲೇ ಕೊರೊನಾ ಸೋಂಕು ದೇಶವ್ಯಾಪಿ ಹರಡುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸೇರಿ ಹಲವೆಡೆ ಲಾಕ್ ಡೌನ್ ಘೋಷಣೆಯಾಗಿದ್ದು ಕೆಲವರ್ಗದ ಜನರು ಸಾಕಷ್ಟು ಕಷ್ಟಪಡುತ್ತಿದ್ದು ಇದರಲ್ಲಿ ಮಂಗಳಮುಖಿಯರು ಕೂಡ ಒಬ್ಬರಾಗಿದ್ದಾರೆ. ಈ ನಿಟ್ಟಿನಲ್ಲಿ ಸ್ನೇಹಾಲಯವು ಅವರಿಗೆ ಸಹಾಯಸ್ತವನ್ನು ಚಾಚುವುದರೊಂದಿಗೆ ಅವರಿಗೆ ದಿನನಿತ್ಯಕ್ಕೆ ಅಗತ್ಯವಾದ ದಿನಬಳಕೆ ಸಾಮಗ್ರಿಯನ್ನು ವಿತರಿಸಲಾಯಿತು.
 ಕಿಟ್ ವಿತರಣೆ ಮಾಡಲು ಸಹಕರಿಸಿದ ಶ್ರೀ ಮಧುಜೀವನ್ ರವರನ್ನು ಸ್ನೇಹಾಲಯದ ಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ತಾ ರವರು ವಂದಿಸಿದರು.
ಈ ಕಾರ್ಯಕ್ರಮಕ್ಕೆ ಕಿಟ್ ದಾನ ಮಾಡಲು ಸಹಕರಿಸಿದ ಶ್ರೀ ಮಧುಜೀವನ್, ಸ್ಟಾನಿ ಬೆಳಾ ರವರು ಹಾಗೂ ನವಸಹಜ ಸಮುದಾಯ ಸಂಘಟನೆಯ ಅಧ್ಯಕ್ಷರಾದ ನಿಖಿಲ್ ರವರು ಹಾಜರಿದ್ದರು.
 
Leave a Comment